Tuesday, September 16, 2008

ಮಳೆರಾಯ



ಮುಂಗಾರು ಮಳೆಯೇ ಏನೋ ನಿನ್ನ ಹನಿಗಳ ಲೀಲೆ ... ಹಾಡಿನ ಸಾಲುಗಳ್ಳನ್ನು ಕೇಳುತಿದರೆ .ಹೌದಲ್ಲ ಮಳೆಯೇ ಏನು ನಿನ್ನ ಹನಿಗಳ ಲೀಲೆ ....ನೀನು ಕೊಪದಿಂದ ರಚ್ಚೆ ಹಿಡಿದ ಮಗುವನಂತೆ ,ಮುನಿದರು ಕಷ್ಟ ಪ್ರೀತಿ ಜಾಸ್ತಿಯಾಗಿ ಒಲೆದರು ಕಷ್ಟ.....ಆಬ್ಬ!!.ಏನು ನಿನ್ನ ಹೊಲೀಕೆಗಳು ,ನಮದೆಯಗಳು ಅದರಲ್ಲೂ ಪತ್ರಿಕೆಯ ಮುಖಪುಟ ಸುದ್ದಿಯಲ್ಲೂ ನೀನಗೆ ಸಿಂಹಪಾಲು .ಮುನಿದ ಮಳೆರಾಯ ,ವರುಣ ಅವಕೃಪೆಗೆ ನಾಡು ತತ್ತರ,ಮಳೆಯ ಆರ್ಭಟ ಜೊತೆಗೆ ನಿನ್ನ ಅಬ್ಬರಕೆ ಸಾವಿನ ಸುದ್ದಿಯ gift. ಜಾಸ್ತಿಕೃಪೆ ತೋರಿದರು ಅವಕ್ರಿಪೆಯೆಮ್ಬ ಹಣೆ ಪಟ್ಟಿ.ರೈತಾಪಿ ಜನರ ಬದುಕಿನಲ್ಲಿ ನಿನಗೆ ಅಶ್ವಿನಿ,ಬರಣಿ, ಕ್ರಿಥಿಕ ಒಂದೊಂದು ಮಳೆಗೂ ಒಂದೋಂದು ಬೆಳೆ ಯಂತೆ..ನೀನು ಕೈ ಕೊಟ್ಟರೆ ಅವರ ಬದುಕು ಕಷ,ಕಷ್ಟ.ಆದರೆ ನೀನು ನಿನ್ನ ಹುಚ್ಚು ಪ್ರೀತಿಯನ್ನು ಸದಾ ತೋರಿಸುತ್ತ್ತಿ .


ಎಲ್ಲೋಬಿದ್ದ ಮಳೆಗೆ ನದಿ ಕೆಂಪಾಗುವಾಂತೆ ನಿನ್ನ ನೆನಪಿಗೆ ನನ್ನ ಕೆನ್ನೆ ಕೆಂಪುಅಯ್ತು ಎಂದು ಪ್ರೇಯಸಿ ಹೇಳುವಂಥೆ ಪ್ರಿತಿಗೂ ನೀನೇನು ಬೇಕು.ಮೊದಲಮಳೆಯಲ್ಲಿ ಸಿಕ್ಕಿ ಮೊದಲ ಸಿಹಿ ಮುತ್ತು ಸಿಕ್ಕಿತಂತೆ ಎಂದೋ ಯಾರೋ ಬರದೆ ಕವನ ಓದಿದರೆ ತೋಯ್ದ ಮಳೆಯ ಚಳಿಯಲ್ಲೂ ಬಿಸಿಯಾಗುವುದು.ನಿನ್ನ ಆರ್ಭಟಕೆ ನನ್ನ ಊರಿನ ಹಳ್ಳ ಮೈತುಂಬಿ ಹರಿದು ದಾಟಲಾಗದೆ ಆಗ್ಗಿದು, ಅದೇ ಆರ್ಭಟಕ್ಕ್ಕ್ಷೆ ಬೆಂಗಳೂರಿನ ಚರಂಡಿಗಳು ಮೈತುಂಬಿ ಹರಿದು ಟ್ರಾಫಿಕ್ ಜಾಮ್ ಆಗಿ ಬಸ್ಸಿನಲ್ಲಿ ಸಿಕ್ಕಿಹಾಕಿ ಕೊಂಡಿದ್ದು.ಮೊದಲ ಮಳೆಯೇ ಸುವಾಸನೆಯನ್ನು ಗ್ರಹಿಸೂಥ ಸೋತ ಸ್ನೇಹಿತನ ಬುಗುರಿಗೆ ಗುನ್ನ ಹೊಡೆದದ್ದು,ನಿನ್ನ ರಬಸದಿಂದ ಮದುವೆ ಮನೆಯ ಚಪ್ಪರ ಮುರಿದು ಬೀದ್ಧು . ಅಬ್ಬ ಏನೇನು ನಿನ್ನ ತುಂಟ ತನಗಳು . ಭೂಮಿ ಹೆಣ್ಣು ಆದರೆ ನೀನು ಗಂಡು .ಕಾಯ್ದು ಬಿಸಿಯಾದ ಭೂಮಿಗೆ ನಿನ್ನ ಸಂಗದಿಂದ ತಣ್ಣಗದಳಂತೆ ಎಂಥ ರೋಮಚನಕರಿ ಹೊಲೀಕೆ .


ಅಯ್ಯ ಮಳೆರಾಯ ನೀನು ಒಂದು ನಾಡಿನ ಅಬಿವೃದ್ದೀಯ ಸೇತುವೆಯಂತೆ .ನೀನಿಂದಲೇ ವಿದ್ಯುತ ,ನೀನಿಂದಲೇ ಹಸಿರು.ನೀನು ಮುನಿದರೆ .ಎಷ್ಟು ಕೋಟಿ ಯೊಜನೇಯಾದರು ಎಲ್ಲ ತೇಲಿಸಿಬೀಡುತ್ತ್ತಿಯ. ನಿನನ್ನು ಹಿಡಿಧೀಡುವುದರಲ್ಲಿ ಕೆಲವೇ ಕೆಲವು ಇಂಜಿನಿಯರುಗಳ ,ರಾಜರ ದೂರ ದೃಸ್ತಿ ನಾವು ಅಬಿವೃದ್ದೀಯ ಪಥದಲ್ಲಿ ಮುಂದೆ ಬಂದಿದ್ದೇವೆ.ಈಗ ನಿನಗೂ ಒಂದು MM unit ಕೊಟ್ಟು ನಿನ್ನನು ಆಳೆದು ನೀನೆ ತುಂಬುವ ಜಲಶಯಗಳ ಅಡಿಗಳನ್ನು ಲೆಕ್ಕ ಹಾಕ್ಕುಥ ಮುಂದಿನ ಬೆಳಕಿನ ದಿನಗಳನ್ನು ನೋಡುತ್ತ್ತೀದೆವೆ. ಹಾಗಂತ ನೀನು ಮುನಿಸಿಕೊಲ್ಲಬೇಡ ಮಹರಾಯ .ನೀನು ಮುನಿದರೆ ಮಗುವನಂತೆ ಮುನಿ, ಒಲಿದರೆ ಪ್ರೆಯಸೀಯಂತೆ ಒಲಿ ,ಆದರೆ ತದ್ವಿರುದ್ಢ ಮಾತ್ರ ಬೇಡ ತುಂಬ ಕಷ್ಟ,ಕಷ್ಟ.ಹಿಂಗರೋ ,ಮುಂಗರೋ ........ ಮಳೆಯೇ ಮಳೆಯೇ ಬರಲಿ ನಿನ್ನ ಮೆರವಣಿಗೆ...

No comments: